ಒಂದು ಪುಟ್ಟ ಕವನ
![](https://blogger.googleusercontent.com/img/b/R29vZ2xl/AVvXsEiW_N3L9_Kc14WlxbgJN2x5UR3QrzxRe2OXDiKcTlh3WiW7d8L0SUk0uwk4hxNiaZ1ya4meD_2Mrk9eI69QxJ2S5BNdB_Oezk2ZKYMgMTV2ETdT_rsRBN-ZanefqTd3JGQcrW82ym1x9bg/s400/noname.jpg)
ನೀನು ಸೋತರೆ-ನಿನ್ನೊಡನೆ ನಿಲ್ಲುವುದಿಲ್ಲ ಆ ನೆರಳು
ಉಸಿರು ನಿಂತರೆ ನಿನ್ನೊಡನೆ ಬರದು-ಏನೂ...
ಅದಕ್ಕೇ ಅನುಭವಿಸಿ ಬಿಡು ಬದುಕನ್ನು.
ದೇವರು ನೀಡಿದ ಈ ಚಿಕ್ಕ ವರವನ್ನು...
ಏಕಾಂಗಿತನದಲ್ಲಿ ನೊಂದುಕೊಳ್ಳುತ್ತಿ
-ನಿನ್ನನ್ನು ನೀನು ಪ್ರೀತಿಸಲು ಕಲಿಯುವವರೆಗೆ.
ಸೋಲನ್ನು ಕಂಡು ಹೆದರುತ್ತಿ
-ಪ್ರಯತ್ನದ ಬಗ್ಗೆ ತಿಳಿಯದೆ ಇರುವವರೆಗೆ.
ಗೆಲುವೆಂದರೆ ಕೂಡ ಹೆದರಿಕೆಯೇ.
-ಅದು ನೀಡುವ ಆಹ್ಲಾದತೆಯನ್ನು ಊಹಿಸಲಾರದವರೆಗೂ.
ಜನರೆಂದರೆ ಕೂಡಾ ಹಿಂಜರಿಕೆಯೇ
-ಕಾಗೆಗಳಿಗಿಂತ ಶ್ರೇಷ್ಠರಾಗಿರುತ್ತಾರೆಂದುಕೊಂಡಿರುವವರೆಗೂ.
ನಿನ್ನನ್ನು ಯಾರಾದರೂ ತಿರಸ್ಕರಿಸುತ್ತಾರೆಂದುಕೊಂಡರೆ
-ಅದು ನಿನ್ನ ಮೇಲೆ ನಿನಗೆ ನಂಬಿಕೆಯಿಲ್ಲದೆ.
ಗಾಯಗಳೆಂದರೆ ನಿನಗೆ ವಿಪರೀತ ನೋವೆಂದುಕೊಂಡರೆ
-ಅವು ಇಲ್ಲದಿರುವಾಗಿನ ಸುಖ ನಿನಗೆ ತಿಳಿಯದೆ.
ಸತ್ಯವನ್ನು ಕಂಡು ನೀನು ನಡುಗಿದೆಯೆಂದರೆ
-ಸುಳ್ಳು ಎಷ್ಟು ನಿಕೃಷ್ಟವೆಂದು ಅರ್ಥವಾಗದೆ.
ಪ್ರೀತಿಸಲು ಸಂಶಯಪಡುತ್ತಿದ್ದೀಯೆಂದರೆ
-ಹೃದಯದಾಳದಿಂದ ಅದು ಸ್ವಚ್ಛವಾಗಿ ಬರದೆ.
ಬದುಕನ್ನು ಆಲಸ್ಯದಿಂದ ಉಸಿರಾಡುತ್ತಿ
-ಸೌಂದರ್ಯವನ್ನು ಆಸ್ವಾದಿಸಲು ಕೈಲಾಗದೆ.
ಗೇಲಿಗೊಳಗಾದರೆ ಎಲ್ಲಿಗೋ ಓಡಿಬಿಡುತ್ತಿ
-ನಿನ್ನಲೇ ನೀನು ನಗಲು ಬಾರದೆ.
ನಾಳಿನ ಭವಿಷ್ಯಕ್ಕೆ ಹೆದರುತ್ತಿ
-ಜ್ನಾನದ ಪೈರಿಗೆ ಅದು ಗೊಬ್ಬರವೆಂದು ತಿಳಿಯದೆ.
ನಿನ್ನೆಯ ಗತವನ್ನು ನೆನೆದು ಚಿಂತಿಸುತ್ತಿ
-ಶಕ್ತಿ ನೀಡುವ ಗೊಬ್ಬರ, ಒಂದು ಕಾಲದ ನಿಕೃಷ್ಟವೆನ್ನುವ ಜ್ಞಾನವಿಲ್ಲದೆ.
ಕತ್ತಲನ್ನು ಕಂಡು ಕಣ್ಮುಚ್ಚಿಕೊಳ್ಳಬೇಡ
-ನಕ್ಷತ್ರಗಳು ಕಾಣುವ ಸಮಯ ಅದು.
ಬೆಳಕನ್ನು ಕಂಡು ಹಿಂತಿರುಗಬೇಡ
-ಸತ್ಯ ಸ್ನೇಹ ಹಸ್ತವನ್ನು ಚಾಚುವ ಸಮಯ ಅದು.
ಗುರಿಯೆಡೆಗೆ ಹೆಜ್ಜೆ ಹಾಕುತ್ತಾ
-ದೂರವನ್ನು ಕಂಡು ಹೆದರಿದರೆ ಹೇಗೆ?
ಪುಟ್ಟ ಹುಳುವಾಗಿ ಹುಟ್ಟಿದರೇನು
-ಅದರ ಗುರಿ ಚಿಟ್ಟೆಯಾಗುವುದು ತಾನೆ!